COP BELAGAVI
@COPBELAGAVI
ID:3171992131
25-04-2015 09:55:09
2,1K Tweets
2,4K Followers
55 Following
ಡಾ. ಬಿ ಆರ್ ಅಂಬೇಡ್ಕರ್ ಜಯಂತಿ ಹಿನ್ನಲೆಯಲ್ಲಿ ದಿನಾಂಕ 12/04/2024 ರಂದು SC/ST ಮುಖಂಡರು, ಪದಾಧಿಕಾರಿಗಳು & ಮಂಡಲಗಳ ಸದಸ್ಯರನ್ನು ಕರೆದು ಪೂರ್ವಭಾವಿ/ಶಾಂತಿ ಸಭೆಯನ್ನು ಕೈಗೊಂಡು ಅಂಬೇಡ್ಕರ್ ಜಯಂತಿ ಕಾರ್ಯಕ್ರಮಗಳು & ಮೆರವಣಿಗೆಯ ವಿಷಯವಾಗಿ ಚರ್ಚಿಸಿ, ಸೂಕ್ತ ಸಲಹೆ ಸೂಚನೆಗಳನ್ನು ನೀಡಲಾಯಿತು.
DGP KARNATAKA
ರಂಜಾನ್ ಹಬ್ಬದ ಶಬ್ - ಎ - ಖಾದರ್ ಕಾರ್ಯಕ್ರಮದ ಹಿನ್ನಲೆಯಲ್ಲಿ ನಗರದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಪ್ರಯುಕ್ತ ದಿನಾಂಕ 06/04/2024 ರ ರಾತ್ರಿಯಿಂದ ಬೆಳಗಿನವರೆಗೂ ಮಾರ್ಕೇಟ್ ಮತ್ತು ಖಡೇಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳೊಂದಿಗೆ ಪೂಟ್ ಪೆಟ್ರೋಲಿಂಗ್ ಮಾಡಲಾಯಿತು.
COP BELAGAVI
ಪೊಲೀಸ್ ಆಯುಕ್ತರ ಕಾರ್ಯಾಲಯದಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಮುಖಂಡರನ್ನು ಕರೆಯಿಸಿ ಶಾಂತತಾ ಸಭೆಯನ್ನು ನಡೆಸಲಾಯಿತು. ಹಾಜರಿದ್ದ ಪೊಲೀಸ್ ಅಧಿಕಾರಿಗಳಿಗೆ ಬಂದೋಬಸ್ತ್ ಬಗ್ಗೆ ಸೂಕ್ತ ಸಲಹೆ ಸೂಚನೆ ನೀಡಲಾಯಿತು. DGP KARNATAKA
ಜಿಲ್ಲಾಡಳಿತ, ಬೆಳಗಾವಿ ನಗರ ಪೊಲೀಸ್ ಹಾಗೂ ಜಿಲ್ಲಾ ಪೊಲೀಸ್ ಮತ್ತು ಚಿಕ್ಕ ಮಕ್ಕಳ ರಕ್ಷಣಾ ಘಟಕ ಬೆಳಗಾವಿ ಸಂಯುಕ್ತಾಶ್ರದಲ್ಲಿ 'ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿಗಳಿಗೆ ಒಂದು ದಿನದ ಸಾಮರ್ಥಾಭಿವೃದ್ಧಿ ತರಬೇತಿ ಕಾರ್ಯಾಗಾರ' ವನ್ನು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಭಾಭವನ ಬೆಳಗಾವಿಯಲ್ಲಿ ಹಮ್ಮಿಕೊಳ್ಳಲಾಯಿತು. DGP KARNATAKA
ಬೆಳಗಾವಿ ನಗರದ ಗ್ರಾಮೀಣ ಠಾಣೆಯ ಪೊಲೀಸ್ ಸಿಬ್ಬಂದಿ ರಾಜಕಿರಣ್ ಪಾಟೀಲ್ ರವರು ಆಗಷ್ಟೇ ಜನಿಸಿದ ಗಂಭೀರ ಸ್ಥಿತಿಯಲ್ಲಿದ್ದ 1 ದಿನದ ಮಗುವಿಗೆ ತುರ್ತಾಗಿ ರಕ್ತ ನೀಡಿ ಜೀವ ಉಳಿಸಿದ್ದು, ಮಗುವಿನ ಜೀವ ಉಳಿಸಲು ಕಾರಣರಾದ ಸಿಬ್ಬಂದಿರವರಿಗೆ ಬೆಳಗಾವಿ ನಗರ ಪೊಲೀಸ್ ವತಿಯಿಂದ ಧನ್ಯವಾದಗಳು.
COP BELAGAVI
ಮಾನ್ಯ ಪೊಲೀಸ್ ಆಯುಕ್ತರು ಬೆಳಗಾವಿ ನಗರ ರವರು ಪೊಲೀಸ್ ಅಧಿಕಾರಿ & ಸಿಬ್ಬಂದಿಗಳ ಕ್ವಾರ್ಟರ್ಸಗಳಿಗೆ ಭೇಟಿ ನೀಡಿ ಸ್ವಚ್ಚತೆಯ & ಅನಾನುಕೂಲತೆಯ ಬಗ್ಗೆ ಮಾಹಿತಿ ತಿಳಿದುಕೊಂಡರು. ಹಾಗೂ ಸಿಟಿ ಪೊಲೀಸ್ ಲೇನದಲ್ಲಿ ಸಿಬ್ಬಂದಿಗಳಿಗೆ ಕಟ್ಟುತ್ತಿರುವ ಕಟ್ಟಡದ ಬಗ್ಗೆ ಪರಿಶೀಲಿಸಿ ಅಧೀನ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದರು. DGP KARNATAKA
ಜಿಲ್ಲಾ ಸ್ವೀಪ್ ಸಮಿತಿ ಬೆಳಗಾವಿ ವತಿಯಿಂದ 2024 ಲೋಕಸಭಾ ಚುನಾವಣೆಯ ನಿಮಿತ್ಯ ಕಡ್ಡಾಯ ಮತದಾನ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಯಿತು. ಎಲ್ಲರೂ ಮತದಾನ ಮಾಡಿ.
COP BELAGAVI
ಹೋಳಿ ಹಬ್ಬದ ನಿಮಿತ್ಯ ಸಾರ್ವಜನಿಕರಲ್ಲಿ ಆತ್ಮಸ್ಥೈರ್ಯ & ಕಾನೂನು ಸುವ್ಯವಸ್ಥೆ ಕುರಿತು ವಿಶ್ವಾಸ ಮೂಡಿಸುವ ಉದ್ದೇಶದಿಂದ ಈ ದಿವಸ ನಗರದ ಮಾರ್ಕೆಟ್ ಹಾಗೂ ಖಡೇಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಮುಖ & ಸೂಕ್ಷ್ಮ ಪ್ರದೇಶಗಳಲ್ಲಿ ರೂಟ್ ಮಾರ್ಚ್ ಮಾಡಲಾಯಿತು.
COP BELAGAVI
ನೂತನ ಪೊಲೀಸ್ ಆಯುಕ್ತರಾದ ಮಾನ್ಯ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಐಪಿಎಸ್ ರವರು ಬೆಳಗಾವಿ ನಗರದ ವಿವಿಧ ಠಾಣೆಗಳಿಗೆ ಭೇಟಿ ನೀಡಿ ಸಿಬ್ಬಂದಿಯವರ ಕರ್ತವ್ಯದ ಬಗ್ಗೆ, ಸ್ವಚ್ಛತೆಯ ಬಗ್ಗೆ ಪರಿವೀಕ್ಷಣೆ ಮಾಡಿದರು. ಅಲ್ಲದೇ ಮುಂಬರುವ ಲೋಕಸಭಾ ಚುನಾವಣೆ ಪ್ರಯುಕ್ತ ಚೆಕ್ ಪೋಸ್ಟಗಳಿಗೆ ಭೇಟಿ ನೀಡಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು DGP KARNATAKA
ಈ ದಿನ 'STUDENT POLICE EXPERIENTIAL LEARNING PROGRAMME' ಅಡಿಯಲ್ಲಿ ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಸಿಇಎನ್ ಠಾಣೆ ಹಾಗೂ ಅಗ್ನಿಶಾಮಕ ಠಾಣೆಗಳಲ್ಲಿ ವಿಶೇಷ ಕಾರ್ಯಗಾರ ಹಮ್ಮಿಕೊಂಡು ಠಾಣೆಗಳ ಕಾರ್ಯನಿರ್ವಣೆ ಹಾಗೂ ಸೈಬರ ಅಪರಾಧ & ಅವುಗಳನ್ನು ತಡೆಯಲು ಅನುಸರಿಸಬಹುದಾದ ಕ್ರಮಗಳ ಕುರಿತು ತಿಳುವಳಿಕೆ ನೀಡಲಾಯಿತು. DGP KARNATAKA
ಮುಂಬರುವ ಲೋಕಸಭೆ ಚುನಾವಣೆ ಹಾಗೂ ರಂಜಾನ್ ಹಬ್ಬದ ನಿಮಿತ್ಯ ಸಾರ್ವಜನಿಕರಲ್ಲಿ ಆತ್ಮಸ್ಥೈರ್ಯ & ಕಾನೂನು ಸುವ್ಯವಸ್ಥೆ ಕುರಿತು ವಿಶ್ವಾಸ ಮೂಡಿಸುವ ಉದ್ದೇಶದಿಂದ CISF & ಖಡೇಬಜಾರ್ ಉಪವಿಭಾಗದ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳೊಂದಿಗೆ ತಿಲಕವಾಡಿ ಠಾಣಾ ಹದ್ದಿಯ ಪ್ರಮುಖ & ಸೂಕ್ಷ್ಮ ಪ್ರದೇಶಗಳಲ್ಲಿ ಈ ದಿನ ರೂಟ್ ಮಾರ್ಚ್ ಮಾಡಲಾಯಿತು DGP KARNATAKA